ವಿ.ಸ್ಯಾನ್ ಇನ್ಫ್ರಾಸ್ಟ್ರಕ್ಚರ್ ಪ್ರೈ.ಲಿ. ಸಂಸ್ಥೆ ಲಾಂಛನದಲ್ಲಿ ವಿಶ್ವ ಕಾರ್ಯಪ್ಪ ಅವರು ನಿರ್ಮಿಸಿರುವ, ಕೃಷ್ಣನ್ ಮ್ಯಾರೇಜ್ ಸ್ಟೋರಿ ಖ್ಯಾತಿಯ ನೂತನ್ ಉಮೇಶ್ ನಿರ್ದೇಶನವಿರುವ ಅಸ್ತಿತ್ವ ಚಿತ್ರ ಇಂದಿನಿ೦ದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ವಿಜಯ್ ಆಂಟೋನಿ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ರಾಕೇಶ್ ಅವರ ಛಾಯಾಗ್ರಹಣವಿದೆ. ಶ್ರೀ ಕ್ರೇಜಿ ಮೈಂಡ್ಸ್ ಸಂಕಲನ, ಕಲೈ ನೃತ್ಯ ನಿರ್ದೇಶನ ಹಾಗೂ ಶಿವಕುಮಾರ್ ಜೆ ಅವರ ಕಲಾ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಯುವರಾಜ್, ಮಧುಸೂದನ್, ಪ್ರಜ್ವಲ್ ಪೂವಯ್ಯ, ದುನಿಯಾ ರಶ್ಮಿ, ಸೋನುಗೌಡ, ಎಡಕಲ್ಲು ಗುಡ್ಡದ ಚಂದ್ರಶೇಖರ್, ರಾಜೇಶ್ ನಟರಂಗ, ಶೈನ್ ಶೆಟ್ಟಿ, ಕೆ.ಎಸ್. ಶ್ರೀಧರ್, ನಾಗರಾಜ್ ಮೂರ್ತಿ, ಗಾಯಕ ಶಶಿಧರ್ಕೋಟೆ, ಶೈಲಜಾ ಜೋಶಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.